ಕರ್ನಾಟಕ ಚುನಾವಣೆ 2018 : ಎಚ್ ಡಿ ಕೆ ಹಾಗು ಜೆಡಿಎಸ್ ಬಗ್ಗೆ ನಾಗಾಸಾಧು ನುಡಿದ ಭವಿಷ್ಯ | Oneindia Kannada

  • 7 years ago
90 years old Naga Sadhu from Kedarnath, called JDS State President HD Kumaraswamy and predicted about upcoming Karnataka Assembly election results.

ಕರ್ನಾಟಕ ಚುನಾವಣೆ: ಕೇದಾರನಾಥ್ ನಿಂದ ನಾಗಸಾಧು ನುಡಿದ ಭವಿಷ್ಯ. ಶಿವನ ಆರಾಧಕರಾಗಿರುವ ನಾಗಸಾಧುಗಳಿಗೆ ವಿಶೇಷ ಶಕ್ತಿಯಿದೆ ಎನ್ನುವುದನ್ನು ಹಿಂದಿನಿಂದಲೂ ನಂಬಿಕೊಂಡು ಬರಲಾಗುತ್ತಿದೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲು ದೇಶ ಪರ್ಯಟನೆ ಮಾಡುವ ಸಾಧುಗಳು, ಕೆಲವೊಮ್ಮೆ ಭವಿಷ್ಯ ನುಡಿಯುವ ಪದ್ದತಿಯೂ ಇದೆ.ಕರ್ನಾಟಕದ ಚುನಾವಣಾ ಈ ವರ್ಷದಲ್ಲಿ ದೂರದ ಕೇದಾರನಾಥ್ ನಿಂದ ನಾಗಸಾಧುವೊಬ್ಬರು ಭವಿಷ್ಯ ನುಡಿದಿದ್ದಾರೆ. ಸಾಧು ನುಡಿದ ಭವಿಷ್ಯದ ಪ್ರಕಾರ, ರಾಜ್ಯದ ಅಪ್ರತಿಮ ದೈವಭಕ್ತ ಕುಟುಂಬವಾದ ದೇವೇಗೌಡರಿಗೆ ಈ ಬಾರಿಯ ಚುನಾವಣೆ ಶುಭ ಸೂಚಕವಾಗಲಿದೆ.ಕಳೆದ ಕೆಲವು ದಿನಗಳ ಹಿಂದೆ ವಾರಣಾಸಿಯಿಂದ ಬಂದಿದ್ದ ನಾಗಸಾಧುಗಳು, ಯಡಿಯೂರಪ್ಪನವರ ನಿವಾಸಕ್ಕೆ ಭೇಟಿ ನೀಡಿ, ಮುಂದಿನ ಚುನಾವಣೆಯಲ್ಲಿ ನಿಮಗೆ ಒಳ್ಳೆದಾಗಲಿದೆ ಎಂದು ಹರಸಿ ಹೋಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.ಕೆಲವು ತಿಂಗಳ ಹಿಂದೆ ತುಮಕೂರಿಗೆ ಕೇದಾರನಾಥ್ ನಿಂದ ಆಗಮಿಸಿದ್ದ ನಾಗಸಾಧುಗಳನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಮತ್ತು ಎಚ್ ಡಿ ರೇವಣ್ಣ ಜೊತೆಯಾಗಿ ಹೋಗಿ ಭೇಟಿ ಮಾಡಿ, ಆಶೀರ್ವಾದ ಪಡೆದುಕೊಂಡಿದ್ದರು...

Recommended