ಎನ್ ಸಿ ಪಿ ಹಾಗು ಬಿ ಎಸ್ ಪಿ ಜೊತೆ ಜೆಡಿಎಸ್ ಮೈತ್ರಿ ಹಿಂದೆ ದೇವೇಗೌಡ್ರ ಲೆಕ್ಕಾಚಾರ ಏನು?

  • 6 years ago
ಕರ್ನಾಟಕದಲ್ಲಿ ಅಷ್ಟೇನೂ ನೆಲೆಯಿಲ್ಲದ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಜೊತೆ, ಜೆಡಿಎಸ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೈಜೋಡಿಸಿರುವುದು ಮೇಲ್ನೋಟಕ್ಕೆ ಪರಿಣಾಮ ಬೀರದು ಎನ್ನುವ ಲೆಕ್ಕಾಚಾರವಿದ್ದರೂ, ಅದರ ಹಿಂದೆ ಗೌಡರ ರಾಜಕೀಯವೇ ಬೇರೆ ಎನ್ನುವ ಮಾತು ಕೇಳಿ ಬರುತ್ತಿದೆ. ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ, ಅವರನ್ನು ಬ್ಲಡಿ ಬಾಸ್ಟರ್ಡ್ ಎಂದು ದೇವೇಗೌಡ್ರು ತರಾಟೆಗೆ ತೆಗೆದುಕೊಂಡಿದ್ದರು. ಇದಾದ ನಂತರ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ 'ನೀಚ' ಎನ್ನುವ ಪದವನ್ನು ಗೌಡ್ರು ಬಳಸಿದ್ದರು.

Recommended