ಗುಂಡ್ಲುಪೇಟೆ ಕ್ಷೇತ್ರ ಬಿಜೆಪಿಗೆ ಬಾರಿ ಕಷ್ಟ ಕಷ್ಟ | Oneindia Kannada

  • 6 years ago
Karnataka assembly elections will be held in a few months. But there is a confusion in BJP candidate in Gundlupet constituency. Geetha Mahadevprasad will contest from Congress. But confusion in BJP between Niranjan Kumar and V Somanna.

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿಯಲ್ಲಿ ಇದೀಗ ತಳಮಳ ಆರಂಭವಾಗಿದೆ. ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿಸಿರುವ ನಿರಂಜನ್ ಕುಮಾರ್ ಬಯಕೆಗೆ ರಾಜ್ಯ ನಾಯಕರು ಎಳ್ಳು-ನೀರು ಬಿಡುವ ಲಕ್ಷಣಗಳು ಎದ್ದು ಕಾಣುತ್ತಿದ್ದು, ಇದು ಜನರಲ್ಲಿ ಕುತೂಹಲ ಮೂಡಿಸಿದ್ದರೆ, ಸ್ಥಳೀಯ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಸಚಿವರಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ನಿಧನದ ನಂತರ ನಡೆದ ಉಪಚುನಾವಣೆ ವೇಳೆ ರಾಜ್ಯದಾದ್ಯಂತ ಮನೆ ಮಾತಾದ ಮತ್ತು ಕುತೂಹಲ ಸೃಷ್ಠಿಸಿದ್ದ ವಿಧಾನಸಭಾ ಕ್ಷೇತ್ರ ಗುಂಡ್ಲುಪೇಟೆಯಲ್ಲಿ ಈ ಬಾರಿಯೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆಯುವುದು ಖಚಿತವಾಗಿದೆ.