ಕರ್ನಾಟಕದ ಜನಗಳಿಗಾಗಿ ಬಿ ಎಸ್ ಯಡಿಯೂರಪ್ಪರಿಂದ ಭಾವನಾತ್ಮಕ ಪತ್ರ | Oneindia Kannada

  • 6 years ago
Ex chief minister of Karnataka B S Yeddyurappa wrote a emotional letter to the people of Karnataka in twitter. My life is living for you people he said. I am not tired, will not. I am going to continue my fight till my last breath.


ಮೂರನೇ ಅವಧಿಯಲ್ಲಿ ಮೂರು ದಿನಗಳ ಕಾಲ ಮಾತ್ರ ಮುಖ್ಯಮಂತ್ರಿಯಾಗುವ ಭಾಗ್ಯ ಪಡೆದ ಬಿ.ಎಸ್. ಯಡಿಯೂರಪ್ಪ ಅವರು ವಿಶ್ವಾಸಮತ ಯಾಚನೆ ಮಾಡದೆ ರಾಜೀನಾಮೆ ನೀಡುವ ಮುನ್ನ ಮಾಡಿದ ಭಾವನಾತ್ಮಕ ಭಾಷಣ ಎಲ್ಲರ ಗಮನ ಸೆಳೆದಿತ್ತು. ಭಾಷಣದ ಉದ್ದಕ್ಕೂ ಅವರು ರೈತರ ಪರ ಹೋರಾಟದ ಆಶಯಗಳನ್ನು ಮತ್ತು ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿನ ಎಲ್ಲ 28 ಸೀಟುಗಳನ್ನೂ ಗೆಲ್ಲುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿಯನ್ನು ಹೆಚ್ಚಿಸುವ ಮಾತುಗಳನ್ನು ಆಡಿದ್ದರು. ಟ್ವಿಟ್ ಲಾಂಗರ್‌ನಲ್ಲಿ 'ನಿಮಗಾಗಿ ಬದುಕುವುದೇ ನನ್ನ ಬದುಕು' ಎಂದು ಜನರನ್ನು ಉದ್ದೇಶಿಸಿ ಸುದೀರ್ಘ ಪತ್ರ ಬರೆದಿರುವ ಯಡಿಯೂರಪ್ಪ, ಆ ಒಂದು ದಿನ ಬರಲಿದೆ. ಸತ್ಯದ ಕಮಲ, ಸಜ್ಜನರ ಮೊಗದಲ್ಲಿ ನಗು ಎರಡೂ ಅರಳುತ್ತದೆ. ಬಿಜೆಪಿ ಬರಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.

Recommended