ಭಾವುಕವಾಗಿ ಎಲ್ಲಾರಿಗೂ ಟ್ವಿಟ್ಟರ್ ಮೂಲಕ ವಂದನೆ ಸಲ್ಲಿಸಿದ ನಟಿ ರಶ್ಮಿಕಾ ಮಂದಣ್ಣ | Filmibeat Kannada

  • 6 years ago
ಭೂಲೋಕದ ಸ್ವರ್ಗ ಎಂದೇ ಕರೆಯಿಸಿಕೊಳ್ಳುವ ಕೊಡಗು ಜಿಲ್ಲೆ ಇದೀಗ ರಣ ಮಳೆಯಿಂದಾಗಿ ಅಕ್ಷರಶಃ ನರಕವಾಗಿದೆ. ಬಿಡದೆ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ, ಕೊಡಗಿನ ಗುಡ್ಡಗಳು ಕುಸಿಯುತ್ತಿವೆ. ಮನೆಗಳು ನೆಲಕಚ್ಚಿವೆ. ಎಷ್ಟೋ ಮಂದಿ ನಿರಾಶ್ರಿತರಾಗಿ ಗಂಜಿ ಕೇಂದ್ರ ಸೇರಿದ್ದಾರೆ. ಕೊಡಗಿನವರ ಕಣ್ಣೀರಿಗೆ ಸ್ಪಂದಿಸಿದ ಎಲ್ಲರಿಗೂ ಕೊಡವತಿ, ಕನ್ನಡ ನಟಿ ರಶ್ಮಿಕಾ ಮಂದಣ್ಣ ಟ್ವಿಟ್ಟರ್ ಮುಖಾಂತರ ವಂದನೆ ಸಲ್ಲಿಸಿದ್ದಾರೆ.