ನಟ ದುನಿಯಾ ವಿಜಯ್ ಮೇಲೆ ಹಲ್ಲೆ ಯತ್ನಿಸಿದ್ದರಾ ರವಿ ಬೆಳಗೆರೆ? | Oneindia

  • 7 years ago
Journalist Ravi Belagere directs Chadachan gang to assault on Actor Duniya Vijay during Bheema Teeradalli Kannada cinema shooting in Vijayapura: Alleges TK Malagonda, This fake news roaming around from Wednesday morning. Finally Duniya Vijay and Malagonda Denies rumor.


ಭೀಮಾ ತೀರದಲ್ಲಿ ಸಿನಿಮಾ ಚಿತ್ರೀಕರಣ ನಡೆಯುವಾಗ ನಟ ದುನಿಯಾ ವಿಜಿ ಮೇಲಿನ ಹಲ್ಲೆಗೆ ಪತ್ರಕರ್ತ ರವಿ ಬೆಳಗೆರೆ ಸೂಚನೆ ಕೊಟ್ಟಿದ್ದರು ಎಂದು ಪತ್ರಕರ್ತ ಟಿ.ಕೆ.ಮಲಗೊಂಡ ಆರೋಪ ಮಾಡಿದರು ಎಂಬ ಸುದ್ದಿ ಹರಿದಾಡಿದಷ್ಟೇ ವೇಗವಾಗಿ ಗಾಳಿ ಸೇರಿದೆ.ಇಂಥ ಆರೋಪ ಮಾಡಿದ್ದನ್ನು ಟಿ.ಕೆ.ಮಲಗೊಂಡ ಅವರು ನಿರಾಕರಿಸಿದ್ದು, ಚಿತ್ರೀಕರಣದ ವೇಳೆ ಅಂಥ ಯಾವ ಘಟನೆಯೂ ನಡೆದಿಲ್ಲ. ಈ ಬಗ್ಗೆ ಐದು ವರ್ಷದ ನಂತರ ಯಾಕೆ ಪ್ರಸ್ತಾವ ಮಾಡುತ್ತಿದ್ದೀರಿ? ಈ ಸಂದರ್ಭದಲ್ಲಿ ಯಾಕೆ ಇಂಥ ಸುದ್ದಿ ಹರಿದಾಡುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ.ಸ್ವತಃ ಮಲಗೊಂಡ ತಾವು ಅಂಥ ಹೇಳಿಕೆ ನೀಡಿಲ್ಲ ಎಂದು ಹೇಳಿರುವುದು, ಜತೆಗೆ ದುನಿಯಾ ವಿಜಿ ಅಂಥ ಯಾವ ಘಟನೆಯೂ ನಡೆದಿಲ್ಲ ಎಂಬ ಸ್ಪಷ್ಟನೆ ನೀಡಿರುವುದನ್ನು ಗಮನಿಸಿದರೆ, ಸೆಷನ್ಸ್ ಕೋರ್ಟ್ ಮುಂದೆ ರವಿ ಬೆಳಗೆರೆ ಅವರ ಅರ್ಜಿ ವಿಚಾರಣೆಗೆ ಬರುವ ವೇಳೆ ಬೇಕೆಂತಲೇ ವದಂತಿ ಹರಿಬಿಡಲಾಯಿತೇ ಎಂಬ ಪ್ರಶ್ನೆ ಮೂಡುತ್ತದೆ.

Category

🗞
News

Recommended