ಸಂಯುಕ್ತ ಹೆಗ್ಡೆ ಮೇಲೆ ಕೆಂಡಾಮಂಡಲವಾದ ಸಮೀರ್ ಆಚಾರ್ಯ ಪತ್ನಿ ಶ್ರಾವಣಿ | Filmibeat Kannada

  • 7 years ago
Bigg Boss Kannada 5: Week 10: Samyuktha Hegde assaulted Sameeracharya & get kicked out from Bigg Boss. Now Sameeracharya wife Shravani speaks about the incident & she says that she wants to question Samyuktha Hegde abut the incident. Sameer wife is furious on Samyuktha Hegde

'ಬಿಗ್ ಬಾಸ್' ಕನ್ನಡದ ಕಾರ್ಯಕ್ರಮದ ಈ ಹಿಂದಿನ ಆವೃತ್ತಿಗಳಲ್ಲಿ ಕಂಡಂತೆ ಈ ಬಾರಿ ಯಾರಾದರೂ ಧಾರ್ಮಿಕ ಪ್ರತಿಪಾದಕರು ಬರಬಹುದು ಎಂಬ ನಿರೀಕ್ಷೆ ಇತ್ತು. ಆ ನಿರೀಕ್ಷೆಗೆ ಉತ್ತರವಾಗಿ ಬಂದವರೇ ಪಂಡಿತ ಸಮೀರಾಚಾರ್ಯ. ದೇವಾಸ್ಥಾನದ ಆರ್ಚಕರು ಎಂದಾಕ್ಷಣ ಬರಿ ಪೂಜೆ, ಪುನಸ್ಕಾರ, ದೈವ ಆರಾಧನೆ ಮಾತ್ರ ಗೊತ್ತಿರುತ್ತೆ ಎಂದುಕೊಂಡಿದ್ದರೇ ತಪ್ಪು. ಸಮೀರಾಚಾರ್ಯ ಅವರು ಬಹುಮುಖ ಪ್ರತಿಭೆ. ಧಾರ್ಮಿಕ ತತ್ವಗಳು, ಆದರ್ಶಗಳ ಜೊತೆಗೆ ವಿವಿಧ ಬಗೆಯ ಪ್ರತಿಭೆ ಹೊಂದಿರುವ ವ್ಯಕ್ತಿ ಪಂಡಿತ ಸಮೀರಾಚಾರ್ಯ.'ಕಿರಿಕ್ ಪಾರ್ಟಿ' ಸಿನಿಮಾ ಖ್ಯಾತಿಯ ಸಂಯುಕ್ತ ಹೆಗ್ಡೆ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟು ಒಂದು ವಾರ ಕಳೆದಿದೆ ಅಷ್ಟೇ. ಅಷ್ಟು ಬೇಗ ಒಂದಾದಮೇಲೊಂದರಂತೆ 'ಕಿರಿಕ್' ಮಾಡಿಕೊಳುತ್ತಲೇ ಇದ್ದ ಸಂಯುಕ್ತ ಹೆಗ್ಡೆಗೆ ಇದೀಗ ಗೇಟ್ ಪಾಸ್ ಸಿಕ್ಕಿದೆ. ಸಮೀರಾಚಾರ್ಯ ಮೇಲೆ ಹಲ್ಲೆ ಮಾಡಿದ ಸಂಯುಕ್ತ ರವರನ್ನ 'ಬಿಗ್ ಬಾಸ್' ಹೊರ ಹಾಕಿದ್ದಾರೆ. ಅಷ್ಟಕ್ಕೂ, ಸಂಯುಕ್ತ 'ಬಿಗ್ ಬಾಸ್' ಮನೆಯೊಳಗೆ ಬಂದಿದ್ದು ವಿಶೇಷ ಅತಿಥಿಯಾಗಿ ಹೊರತು ಸ್ಪರ್ಧಿಯಾಗಲ್ಲ.ಇದೀಗ ಸಮೀರ್ ಪತ್ನಿ ಶ್ರಾವಣಿ ಏನ್ ಹೇಳ್ತಾರೆ ನೋಡಿ