ನಾರಾಯಣಪುರ ಬಸವಸಾಗರ ಜಲಾಶಯದ ಒಡಲು ಭರ್ತಿ: ಉಕ್ಕಿ ಹರಿದ ಕೃಷ್ಣಾ

  • 6 years ago
ಯಾದಗಿರಿ, ಜುಲೈ.18: ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯ ಇಷ್ಟು ದಿನ ಬತ್ತಿ ಹೋಗಿತ್ತು. ಆದರೆ ಈಗ ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಗೆ ನಾಲ್ಕು ಜಿಲ್ಲೆಯ ಜೀವನಾಡಿ ಬಸವಸಾಗರ ಜಲಾಶಯದ ಒಡಲು ಭರ್ತಿಯಾಗಿದೆ. ನೀರಿನ ಒಳ ಹರಿವು ಹೆಚ್ಚಳದಿಂದ ಬಸವಸಾಗರ ಜಲಾಶಯದ 10 ಗೇಟುಗಳು ತೆಗೆದು 1 ಲಕ್ಷ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಹರಿ ಬಿಡಲಾಗುತ್ತಿದ್ದು, ಜಲಾಶಯದಿಂದ ನೀರು ಹರಿ ಬಿಡುತ್ತಿದ್ದರಿಂದ ಬತ್ತಿದ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ.

Category

🗞
News

Recommended