• 6 years ago
ಯಾವುದೇ ಊರಿಗೆ ಅಲ್ಲಿನ ದೇವತೆಗಳು ಕಾವಲಿರುತ್ತಾರೆ. ಗ್ರಾಮಗಳಿಗಾದರೆ ಗ್ರಾಮ ದೇವತೆ ಎಂದು ಕರೆಯುತ್ತಾರೆ. ಅದೇ ರೀತಿ ಯಾವುದೇ ರಾಜ್ಯದ ಆತ್ಮದಂತಿರುವ ರಾಜಧಾನಿಗೆ ಅಲ್ಲಿನ ಸ್ಥಳೀಯ ದೇವತೆಗಳನ್ನು ಗೌರವದಿಂದ ನೋಡಿಕೊಳ್ಳಬೇಕು ಹಾಗೂ ಭಕ್ತಿಯಿಂದ ಆರಾಧಿಸಬೇಕು. ಅದು ಗಂಡು ದೇವರಿರಲಿ, ಹೆಣ್ಣು ದೇವರಿರಲಿ ಆ ದೇವರಿಗೆ ಗೌರವ ನೀಡಬೇಕಾದ್ದು ಅತ್ಯಗತ್ಯ. ಬೆಂಗಳೂರಿನ ಇಂದಿನ ಸ್ಥಿತಿಗೆ ಅಂದರೆ ಗೊಂದಲ, ಬಿಬಿಎಂಪಿಯ ಅಸ್ಥಿರತೆ, ಆಕಸ್ಮಿಕ ಅವಘಡಗಳು ಹಾಗೂ ಕನ್ನಡ ಚಿತ್ರರಂಗದ ಆರಕ್ಕೇರದ ಮೂರಕ್ಕಿಳಿಯದ ತ್ರಿಶಂಕು ಸ್ಥಿತಿ, ಯಾವುದೇ ಸರಕಾರ ಅಸ್ತಿತ್ವಕ್ಕೆ ಬಂದರೂ ನಿರಂತರವಾಗಿ ಕಾಡುವ ಗೊಂದಲ...ಇವೆಲ್ಲಕ್ಕೂ ಕಾರಣ ಆಗಿರುವುದು ಬೆಂಗಳೂರಿನಲ್ಲಿ ಆ ದೇವತೆಗಳ ನಿರ್ಲಕ್ಷ್ಯ.

Category

🗞
News

Recommended